ಕಾಡು ಹಕ್ಕಿಯ ಹಾಡು

ಕನಸಿಳಿಯದ ಗಂಟಲಿನಲಿ
ನೋವುಗಳ ತುಂಬಿಸಿದಂತೆ!

ಒಡಲಾಳದೊಳಗೆ ಮಥಿಸಿ ಮಥಿಸಿ
ಲಾವಾರಸವಾದ ಅಮೂರ್ತ ನೋವುಗಳು
ಸಿಡಿಯಲಾಗದ ಜ್ವಾಲಾಮುಖಿಯಂತೆ!

ಧ್ವನಿಯಡಗಿಸಿದ ಕಂಠವಾಗಿ
ಹನಿಯಡಗಿಸಿದ ಕಡಲಾಗಿ
ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ
ನೋವುಗಳು ಮಾತಾಗುವುದೇ ಇಲ್ಲ
ಬದಲಿಗೆ ಹಾಡಾಗುತ್ತವಲ್ಲಾ!

ಆಳದಲ್ಲೆಲ್ಲೋ ಮದ್ದುಗುಂಡುಗಳು
ಸಿಡಿದು, ಎದೆಯೊಳಗೆಲ್ಲಾ ದಹಿಸಿ
ಆಡಲಾಗದ ಅನುಭವಿಸಲಾಗದ ಕಸಿವಿಸಿ
ಎರಡು ಪದರು ರೊಟ್ಟಿಯೊಳಗೆ
(ಅತ್ತ ದರಿ-ಇತ್ತ ಪುಲಿಯಂತೆ)
ಸ್ಯಾಂಡ್‌ವಿಚ್ ಆಗುವ ಹಸಿ-ಬಿಸಿ!
ಮತ್ತೆ ಉಲಿಯುವುದು ಅಶಾಸ್ತ್ರೀಯ ಹಾಡೇ!

ಹಾಡಬಹುದೇ ರಾಗವಿಲ್ಲದೇ
ತಾಳವಿಲ್ಲದೇ, ಭಾವವಿಲ್ಲದೇ ಹೀಗೆ?
ಬರೀ ನೋವು ತುಂಬಿದ ಹಾಡು?
ಶಾಸ್ತ್ರೀಯ ಸಂಗೀತವರಿಯದ
ಕಾಡುಹಕ್ಕಿಯ ಪಾಡು!

ತಾನೊದರಿದ್ದೆಲ್ಲಾ ಸಂಗೀತವೇ
ಎಂಬ ಹಠವಿಲ್ಲ ಹಕ್ಕಿಗೆ
ಯಾರು ಕೇಳಲಿ ಬಿಡಲಿ
ತನ್ನೆದೆಯ ನೋವುಗಳ
ತಾಳಲಾಗದ ಭಾವಗಳ
ಹಾಡಾಗಿಸಿ ತಾನೇ ನಲಿಯುತ್ತದೆ
ತನ್ನ ಹಾಡಿಗೆ!
ನಗುತ್ತದೆ;
ತನ್ನ ಪಾಡಿಗೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಪಾರ್ಟ್-ಮೆಂಟ್
Next post ವರ್ತುಲ

ಸಣ್ಣ ಕತೆ

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

cheap jordans|wholesale air max|wholesale jordans|wholesale jewelry|wholesale jerseys